ಬೈಂದೂರಿನ ಉಪ್ಪಂದದ ಚಿನ್ನದ ಅಂಗಡಿಯಲ್ಲಿ ಚಿನ್ನ ತೆಗೆದುಕೊಳ್ಳುವ ವರ್ತಕರ ರೀತಿಯಲ್ಲಿ ನಾಟಕೀಯವಾಗಿ ಎಲ್ಲಾ ಚಿನ್ನವನ್ನು ನೋಡಿ ಕೊನೆಗೆ ಸರ ಮತ್ತು ಬಳೆಗಳು ಬೇಕೆಂದು ಹೇಳಿ ತೂಕ ಮಾಡುವ ಸಮಯದಲ್ಲಿ ಚಿನ್ನವನ್ನು ಕದ್ದು ಓಡಿ ಹೋದವನನ್ನು ಬೆನ್ನಟ್ಟಿದ ಪೊಲೀಸರು ವಯರ್ಲೆಸ್ ನಲ್ಲಿ ಜಿಲ್ಲೆಯಾದ್ಯಂತ ಮಾಹಿತಿಯನ್ನು ಪ್ರಚಾರಪಡಿಸಿದರು ಹೈವೇ ಪೆಟ್ರೋಲ್ ಸಿಬ್ಬಂದಿಯವರು ಈ ಆರ್ ವಿ 112 ಸಿಬ್ಬಂದಿಯವರು , ಗಂಗೊಳ್ಳಿ ಪಿಎಸ್ಐ ಕುಂದಾಪುರ ಪಿಎಸ್ಐ ಸಂಚಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಾಕ ಬಂದಿಯನ್ನು ಮಾಡಿ ಹಾಗೂ ಊರಿನ ಜನರ ಸಹಾಯವನ್ನು ಪಡೆದು ತಕ್ಷಣ ಕಳ್ಳನನ್ನು ಬಂದಿಸಿ ಚಿನ್ನವನ್ನು ವಶಪಡಿಸಿಕೊಂಡರು ಈ ಕಾರ್ಯಚರಣೆಗೆ ಉಡುಪಿ ಎಸ್ಪಿ ಅವರು ಅದ್ಭುತ ರೀತಿಯಲ್ಲಿ ಮಾರ್ಗದರ್ಶನನ್ನು ನೀಡಿರುತ್ತಾರೆ ಊರಿನ ಗ್ರಾಮಸ್ಥರು ಪೋಲಿಸ್ ಇಲಾಖೆಗೆ ಅಭಿನಂದಿಸಿದರು
